Slide
Slide
Slide
previous arrow
next arrow

ಶೌರ್ಯ ವಿಪತ್ತು ತಂಡದಿಂದ ಗೋಪೂಜೆ

300x250 AD

ಸಿದ್ದಾಪುರ: ತಾಲೂಕಿನ ಭಾನ್ಕುಳಿ ಮಠದ ಗೋಸ್ವರ್ಗದಲ್ಲಿ ಡಾ.ವೀರೇಂದ್ರ ಹೆಗ್ಡೆ ಅವರ 75ನೇ ಜನುಮದಿನಾಚರಣೆ ಪ್ರಯುಕ್ತ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಶೌರ್ಯ ವಿಪತ್ತು ತಂಡದಿಂದ ಶ್ರಮದಾನ ಹಾಗೂ ಗೋಪೂಜೆ ಕಾರ್ಯಕ್ರಮ ಶನಿವಾರ ನಡೆಯಿತು.

ಶ್ರಮದಾನದಲ್ಲಿ ತಾಲೂಕು ಶೌರ್ಯ ವಿಪತ್ತು ತಂಡದ ಪ್ರಮುಖ ಚಂದ್ರಶೇಖರ ಅವರ ನೇತೃತ್ವದಲ್ಲಿ 35 ಕ್ಕೂ ಹೆಚ್ಚು ಸದಸ್ಯರು ಗೋ ಶಾಲೆ ಸ್ವಚ್ಚತೆ ಹಾಗೂ ಗೋಪೂಜೆ ನೆರವೇರಿಸಿದರು. ನಂತರ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಸಿದ್ದಾಪುರ ಮಂಡಲ ಅಧ್ಯಕ್ಷ ಮಹೇಶ ಭಟ್ಟ ಚಟ್ನಳ್ಳಿ ಗೋವಿನ ಮಹತ್ವ, ಗೋಸ್ವರ್ಗದ ಹಿನ್ನೆಲೆ ಕುರಿತು ಮಾತನಾಡಿ ಶೌರ್ಯ ತಂಡದ ಕಾರ್ಯದ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.

300x250 AD

ಜಿಲ್ಲಾ ಜನಜಾಗೃತಿ ವೇದಿಕೆಯ ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ಸುಭಾಸ್ ನಾಯ್ಕ ಕಾನ್ಸೂರು, ರಮೇಶ ಹೆಗಡೆ ಹಾರ್ಸಿಮನೆ, ತಾಲೂಕು ಯೋಜನಾಧಿಕಾರಿ ಪ್ರಭಾಕರ ನಾಯ್ಕ, ತಾಲೂಕು ಶೌರ್ಯ ತಂಡದ ಪ್ರಮುಖ ಚಂದ್ರಶೇಖರ ಮಾತನಾಡಿದರು. ಗೋಸ್ವರ್ಗದ ಉಸ್ತುವಾರಿ ಆದರ್ಶ ಭಟ್ಟ ಉಪಸ್ಥಿತರಿದ್ದರು. ಪೂರ್ಣಿಮಾ, ಲೀಲಾವತಿ, ಜ್ಯೋತಿ ಕಾರ್ಯಕ್ರಮ ನಿರ್ವಹಿಸಿದರು.

Share This
300x250 AD
300x250 AD
300x250 AD
Back to top